ಕಾಂಗ್ರೆಸ್ ಪಕ್ಷವು ಸದಾ ದಲಿತ ಸಮುದಾಯವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದು ಯಾವುದೇ ಅಭಿವೃದ್ಧಿ ಮಾಡುವ ಗೋಜಿಗೆ ಹೋಗಿಲ್ಲವೆಂದು ಅಂಬೇಡ್ಕರ್ ಪುತ್ರ ಪ್ರಕಾಶ್ ಅಂಬೇಡ್ಕರ್ ಹೇಳಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಪರವಾಗಿ ಮಾತನಾಡಿದ ಅವರು ಅಂಬೇಡ್ಕರ್ ಕುಟುಂಬ ಜೊತೆಗೆ ನಮ್ಮ ಕುಟುಂಬ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದು ನಮ್ಮಲ್ಲಿ ಅಂಬೇಡ್ಕರ್ ರಕ್ತ ಹರಿಯುತ್ತಿದ್ದು ಬುದ್ಧ,ಬಸವ, ಅಂಬೇಡ್ಕರ್ ಹೆಸರಿನ ಮೇಲೆ ಡೋಂಗಿ ರಾಜಕಾರಣ ಮಾಡುವ ವ್ಯಕ್ತಿಗಳಿಂದ ದೂರವಿರಬೇಕು,ತಮ್ಮ ಮತಗಳಿಕೆಗೆ ದಲಿತರನ್ನು ಕಾಂಗ್ರೆಸ್ ಉಪಯೋಗಿಸಿಕೊಂಡಿದ್ದು ವಿನಹ ಅವರ ಸಾಮಾಜಿಕ ಸುಧಾರಣೆಗೆ ಏನು ಸಾಧನೆ ಮಾಡಿಲ್ಲವೆಂದು ತಿಳಿಸಿದರು.
Post a Comment