ಕೋವಿಶಿಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಗಳಾಗಿವೆ ವದಂತಿಗಳು ಹಬ್ಬಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನರು ಭಯಪಡುವ ಅಗತ್ಯ ವಿಲ್ಲ,ಜನ ಇಂತಹ ವದಂತಿಗಳಿಗೆ ಕಿವಿಗೊಡಬಾರದು ವ್ಯಾಕ್ಸಿನ್ ಪಡೆದು ಎರಡು ವರ್ಷ ಕಳೆದಿದೆ, ಹಾಗಾಗಿ ಈಗ ಅಷ್ಟು ಅಡ್ಡ ಪರಿಣಾಮ ಸಾಧ್ಯವಿಲ್ಲವೆಂದರು.ಆರೋಗ್ಯ ದೇಹದಲ್ಲಿ ಸಮಸ್ಯೆ ಗಳ ಅನುಮಾನಗಳಿದ್ದರೆ ಆಸ್ಪತ್ರೆ ಭೇಟಿ ನೀಡಿ ತಪಾಸಣೆ ಮಾಡಿಕೊಳ್ಳಿ,ವ್ಯಾಕ್ಸಿನ್ ವಿಚಾರ ವಾಗಿ ಕೇಂದ್ರ ಸರ್ಕಾರವೇ ಮಾರ್ಗಸೂಚಿ ನೀಡಲಿದ್ದು ಅದನ್ನು ಪಾಲಿಸಲಿದ್ದೇವೆ, ಕರ್ನಾಟಕ ದಲ್ಲಿ ಲಸಿಕೆ ಪಡೆದವರಲ್ಲಿ ಕೆಲವರಿಗೆ ಆರೋಗ್ಯದ ಬಗ್ಗೆ ಸಮಸ್ಯೆಯಾಗಿದೆ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದೆಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Post a Comment