ಮಲ್ಪೆ -ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಆಗುಂಬೆ ಘಾಟಿ ಯಲ್ಲಿ ಸುರಂಗ ಯೋಜನೆ ಗೆ ಎನ್ ಹೆಚ್ ಎಐ ಒಪ್ಪಿಗೆ ನೀಡಿದೆ.ಯೋಜನೆಯ ಸಾಧಕ ಬಾಧಕ ಅರಿಯಲು ಡಿಪಿಆರ್ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದ್ದು 2 ಕೋಟಿ ರೂ ವೆಚ್ಚದಲ್ಲಿ ಡಿಪಿಆರ್ ಸಿದ್ದವಾಗಲಿದೆ.ಉಡುಪಿ ಜಿಲ್ಲೆ ಹೆಬ್ರಿ,ಸೋಮೇಶ್ವರ ದಿಂದ ತೀರ್ಥಹಳ್ಳಿ ತಾಲೂಕಿನ ಮೆಗರಹಳ್ಳಿ ಸಂಪರ್ಕಿಸುವ 12 ಕಿಮೀ ದೂರಕ್ಕೆ 3,500 ಕೋಟಿ ವೆಚ್ಚವಾಗಲಿದ್ದು, ಆಗುಂಬೆ ಘಾಟಿ ಯಲ್ಲಿ ಸುರಂಗ ಮಾರ್ಗ ಕ್ಕೆ ಸೂಚಿಸಲಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
Post a Comment