ಸುಳ್ಯ ಹಿರಿಯ ಬಿ ಜೆ ಪಿ ಮುಖಂಡ ಹಾಗೂ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ನಿಧನ

 



ಸುಳ್ಯದ ಹಿರಿಯ ಉದ್ಯಮಿ, ಆಗಿರುವ ಜಾಲ್ಸೂರಿನ  ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮಾಲಕ, ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಾಲ್ಸೂರು ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರಾಗಿದ್ದ ಉಪೇಂದ್ರ ಕಾಮತ್‌ರವರು ಇದೀಗ ಸ್ವಗೃಹದಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಪದ್ಮಾವತಿ ಕಾಮತ್, ಪುತ್ರ ಸುಧಾಕರ ಕಾಮತ್‌, ಸೊಸೆ, ಮೊಮ್ಮಕ್ಕಳನ್ನು, ಬಂಧುಗಳನ್ನು ಅಗಲಿದ್ದಾರೆ.

ಸುಳ್ಯ  ವಿನೋಭನಗರ ದ ಹಿರಿಯ ಉದ್ಯಮಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಉಪೇಂದ್ರ ಕಾಮತ್ ಅಲ್ಪ ಕಾಲ ದ ಅಸೌಖ್ಯದಿಂದ ನಿಧನರಾಗಿದ್ದರೆ. ಅಯೋಧ್ಯೆ ಚಳವಳಿ,ರಾಮ ರಥ ಯಾತ್ರೆ ಹೀಗೆ ಅನೇಕ ಚಳವಳಿ ಗಳಲ್ಲಿ ದಂಪತಿ ಸಮೇತ ಭಾಗವಹಿಸಿ ಪ್ರೇರಣೆಯಾದವರು ಉಪೇಂದ್ರ  ಕಾಮತ್.ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ,ಕಲ್ಯಾಣ್ ಸಿಂಗ್ ರಂತ ಹಿರಿಯರು ಇವರ ಮನೆ  ಹಿಂದೆ ಭೇಟಿ ನೀಡಿದ್ದರು,ಗೇರು ಬೀಜ ಕಾರ್ಖಾನೆ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡಿದ್ದರು ವಿವೇಕಾನಂದ ಸಂಸ್ಥೆ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಕಾಮತ್ ರ ಪಾತ್ರ ಹಿರಿದು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget