ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 14ನೇ ತಿರುವು ಸೂರ್ಯಾಸ್ತ ಸ್ಥಳ ಬಳಿ ಗೋಡೆ ಬಿರುಕು ಮೂಡಿದ್ದು ಕುಸಿಯುವ ಸ್ಥಿತಿಯಲ್ಲಿದೆ. ಕಿರಿದಾದ ಘಾಟಿ ಯಲ್ಲಿ ಘನ ವಾಹನ ಗಳ ಸಂಚಾರ ಮತ್ತು ತಡೆಗೋಡೆ ಡಿಕ್ಕಿ ಹೊಡೆದ ಪರಿಣಾಮ ಹಾನಿಯಾಗಿದೆ.ಪ್ರವಾಸಿಗರ ವಾಹನ ದಟ್ಟಣೆ ಘಾಟಿ ಯಲ್ಲಿ ಹೆಚ್ಚಾಗಿ,ರಸ್ತೆ ಮೇಲೆ ಒತ್ತಡ ಹೆಚ್ಚುತ್ತಿದೆ. ಮಳೆಗಾಲ ದಲ್ಲಿ ನೀರು ನುಗ್ಗಿದರೆ ತಡೆಗೋಡೆ ಹಾನಿ ಯಾಗಿ ರಸ್ತೆ ಸಂಚಾರ ನಿರ್ಬಂಧ ವಾಗಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘನ ವಾಹನಗಳನ್ನು ಆದಷ್ಟು ನಿರ್ಬಂಧಿಸಿ ,ಕುಸಿತಗೊಂಡ ತಡೆಗೋಡೆಯನ್ನು ಮಳೆಗಾಲ ಮುನ್ನ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ,ಇಲ್ಲದಿದ್ದರೆ ಕರಾವಳಿ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.
Post a Comment