ಕಲಿಕೆಗೆ ವಯಸ್ಸು ಅಡ್ಡಿಯಾಗದು ಮಾತಿನಂತೆ ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದ ಛಾಯಮ್ಮ ಮತ್ತು ಮಗಳು ಶ್ರೀವಾಣಿ SSLC ಪರೀಕ್ಷೆಯನ್ನು ಮಳ್ಳೂರಿನ ಸ್ವಾಮಿ ವಿವೇಕಾನಂದರ ಪರೀಕ್ಷಾ ಕೇಂದ್ರದಲ್ಲಿ ಜೊತೆಯಾಗಿ ಬರೆದಿರುವುದು ವಿಶೇಷ. ಒಂಬತ್ತನೆ ತರಗತಿ ವರೆಗೆ ಓದಿರುವ ಛಾಯಮ್ಮ ಮನೆಯ ಮಕ್ಕಳೂ,ಶಾಲೆಯ ಶಿಕ್ಷಕರ ಪ್ರೋತ್ಸಾಹದಿಂದ ಪರೀಕ್ಷೆ ಬರೆಯಲು ಅನುಕೂಲವಾಯಿತೆಂದರು.,ಪರೀಕ್ಷೆ ಉತ್ತಮವಾಗಿ ಬರೆದಿದ್ದು ನಾವಿಬ್ಬರು ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗುವ ವಿಶ್ವಾಸವನ್ನು ಮಗಳು ಶ್ರೀವಾಣಿ ವ್ಯಕ್ತಪಡಿಸಿದ್ದಾರೆ.
Post a Comment